ದಾವಣಗೆರೆ, ಮಾ.5- ಲಿಂಗಸೂರಿನಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ಹಾಗೂ ಬಳ್ಳಾರಿ ಜಿಲ್ಲೆ ಕರೂರಿನಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ದಾವಣಗೆರೆ ಕ್ರೀಡಾ ವಸತಿ ನಿಲಯದ ತಂಡವು ಪ್ರಥಮ ಸ್ಥಾನ ಗಳಿಸಿದೆ.
ವಿಜೇತ ತಂಡದಲ್ಲಿ ಜಿ.ಬಿ. ಅರುಣ್, ಲಕ್ಷ್ಮಣ್ ಉತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ತಂಡದ ಪರ ಭರತ್ಕುಮಾರ್, ಅರ್ಜುನ ರಂಗಸ್ವಾಮಿ, ವೀರೇಶ್, ಶರತ್, ದಾದಾಪೀರ್ ಕೃಷ್ಣ, ಇಮ್ರಾನ್, ಪುನೀತ್ ಹಾಗೂ ಬಾಹುಬಲಿ ಇವರುಗಳು ಉತ್ತಮ ಪ್ರದರ್ಶನ ನೀಡಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತರಬೇತುದಾರ ಜೆ. ರಾಮಲಿಂಗಪ್ಪ ತಿಳಿಸಿದ್ದಾರೆ.