ಕೂಡ್ಲಿಗಿ : ಸಚಿವ ಉಮೇಶ್ ಕತ್ತಿ ವಜಾಗೆ ಆಗ್ರಹ

ಕೂಡ್ಲಿಗಿ, ಮೇ 1- ರೈತನಿಗೆ ಸಾಯಿ ಹೋಗು ಎಂದು ಹೇಳಿರುವ ಆಹಾರ ಪೂರೈಕೆ ಸಚಿವ ಉಮೇಶ್ ಕತ್ತಿ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ. ಗುರುಸಿದ್ಧನಗೌಡ,   ಕಾರ್ಯದರ್ಶಿ ಟಿ. ಉಮೇಶ್,   ಎಸ್ಟಿ ಸೆಲ್  ಜಿಲ್ಲಾಧ್ಯಕ್ಷ ಕಾವಲಿ ಶಿವಪ್ಪ ನಾಯಕ,  ಬ್ಲಾಕ್‌ ಕಾಂಗ್ರೆಸ್ ವಕ್ತಾರ ಮಹ್ಮದ್ ಜಿಲಾನ್,  ಪ.ಪಂ ಸದಸ್ಯರಾದ ಶುಕೂರ್, ರಾಘವೇಂದ್ರ ಮತ್ತು ನಿತೀಶ್, ಹನುಮಂತ  ಉಪಸ್ಥಿತರಿದ್ದರು.

error: Content is protected !!