ಚಳ್ಳಕೆರೆ : ಆಂಜನೇಯಗೆ ಪ್ರಶಸ್ತಿ

ಚಳ್ಳಕೆರೆ, ಮಾ.4- ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಭೋವಿ ಸಮಾಜದ ತಾಲ್ಲೂಕು ಕಾರ್ಯದರ್ಶಿ ಕಮ್ಮತ್ ಮರಿಕುಂಟೆ ಹೆಚ್. ಆಂಜನೇಯ ಅವರಿಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರವಾಸಿ ಉತ್ಸವ 2021 ಮತ್ತು ವಿಜಯನಗರ ಕರ್ನಾಟಕ ದ್ವಿತೀಯ ಸಾಂಸ್ಕೃತಿಕ ಸಮ್ಮೇಳನದಲ್ಲಿ `ಕಲ್ಯಾಣ ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸುರ್ವೇ ಕಲ್ಚರ್ ಅಕಾಡೆಮಿ ಚಿತ್ರದುರ್ಗದ ಜಿಲ್ಲಾ ಧ್ಯಕ್ಷ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಉಪಾ ಧ್ಯಕ್ಷ ಡಿ. ವೀರಣ್ಣ, ದ್ಯಾಮರಾಜ, ಕಾರ್ಯನಿರತ ಸದಸ್ಯರಾದ ಜಾಲಿ ಮಂಜು, ಆರ್. ಸತೀಶ್‌ಕುಮಾರ್, ಸುರೇಶ್ ಬೆಳಗೆರೆ, ಮಂಜುನಾಥ, ಕರ್ನಾಟಕ ಅಕಾಡೆಮಿ ಮಾಜಿ ಸದಸ್ಯರಾದ ಪಿ. ತಿಪ್ಪೇಸ್ವಾಮಿ, ನಜೀರ್ ಉಪಸ್ಥಿತರಿದ್ದರು.

error: Content is protected !!