ನಂದಿಗುಡಿ ಶ್ರೀಗಳ ಆಶೀರ್ವಾದ ಪಡೆದ ನೊಳಂಬ ಸಂಘದ ಡಾ. ಗಂಗಪ್ಪ, ಈಶ್ವರಪ್ಪ

ಮಲೇಬೆನ್ನೂರು, ಮಾ.3 – ಬೆಂಗಳೂರಿನಲ್ಲಿರುವ ನೊಳಂಬ ಲಿಂಗಾಯತ ಸಂಘದ ಕೇಂದ್ರ ಸಮಿತಿಗೆ ದಾವಣಗೆರೆ ಜಿಲ್ಲೆಯಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಮಾಜಿ ಶಾಸಕ ಡಾ. ಡಿ.ಬಿ. ಗಂಗಪ್ಪ ಹಾಗೂ ನಿವೃತ್ತ ಇಂಜಿನಿಯರ್ ಸಿ.ಬಿ. ಈಶ್ವರಪ್ಪ ಅವರು ನಂದಿಗುಡಿ ಬೃಹನ್ಮಠಕ್ಕೆ ತೆರಳಿ, ಶ್ರೀ ಸಿದ್ದರಾಮೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಶ್ರೀಮಠದಿಂದ ನೂತನ ನಿರ್ದೇಶಕರನ್ನು ಸನ್ಮಾನಿಸಿದ ಶ್ರೀಗಳು ಸಮಾಜದ ಸಂಘಟನೆ, ಸಮಾಜಕ್ಕೆ ದೊರಕಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಕಾರ್ಯನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಹಿಂಡಸಘಟ್ಟಿ ಪರಮೇಶ್ವರಪ್ಪ, ವಾಸನ ಬಸವರಾಜಪ್ಪ, ಬಂಡೇರ ತಿಮ್ಮಣ್ಣ, ಹಳ್ಳಿಹಾಳ್ ಪರಮೇಶ್ವರಪ್ಪ, ಹಿಂಡಸಘಟ್ಟಿ ಮುರುಗೇಶ್, ಜಿಗಳಿಯ ಎಕ್ಕೆ ಗೊಂದಿ ರುದ್ರಗೌಡ, ಹೊನ್ನಾಳಿ ತಾಲ್ಲೂಕಿನ ನೇಮಿಚಂದ್ರಪ್ಪ ಸೇರಿದಂತೆ ಮತ್ತಿತರರಿದ್ದರು.

error: Content is protected !!