ಶ್ರೀ ಬಸವೇಶ್ವರರ ಬೃಹತ್‌ ಪುತ್ಥಳಿಗೆ ಒಂದು ಲಕ್ಷ ರೂ. ದೇಣಿಗೆ

ದಾವಣಗೆರೆ, ಮಾ. 1 – ಚಿತ್ರದುರ್ಗ ಬೃಹನ್ಮಠದಿಂದ ಚಿತ್ರದುರ್ಗದಲ್ಲಿ ಸುಮಾರು 12 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಬಸವೇಶ್ವರರ ಬೃಹತ್‌ ಪುತ್ಥಳಿಗೆ ಆವರಗೆರೆಯ ಜಮೀನ್ದಾರರಾದ ಶ್ರೀಮತಿ ಗೌರಮ್ಮ ಮತ್ತು ಗೌಡ್ರು ಜಯದೇವಪ್ಪ ಹಾಗೂ ಮಕ್ಕಳು ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. 

ನಗರದ ಶ್ರೀ ಶಿವಯೋಗಾಶ್ರಮದಲ್ಲಿ ನಿನ್ನೆ ನಡೆದ ಶ್ರೀ ಜಯದೇವ ಜಗದ್ಗುರುಗಳವರ ಸ್ಮರಣೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ದೇಣಿಗೆಯ ಚೆಕ್ಕನ್ನು ಗೌಡ್ರು ಜಯದೇವಪ್ಪ ಅವರ ಪುತ್ರರೂ ಆಗಿರುವ ನಗರ ಪಾಲಿಕೆ ಮಾಜಿ ಸದಸ್ಯ ಜಿ. ಸುರೇಶ್‌ ಅವರು ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ನೀಡಿದರು. ಜಿ. ಸುರೇಶ್‌ ಮತ್ತು ಶ್ರೀಮತಿ ಶಿಲ್ಪಾ ಸುರೇಶ್‌ ದಂಪತಿಯನ್ನು ಶರಣರು ಶಾಲು ಹೊದಿಸಿ ಸನ್ಮಾನಿಸಿದರು. 

ಹಿರಿಯ ಕಾರ್ಮಿಕ ಮುಖಂಡ ಹೆಚ್. ರಾಮಚಂದ್ರಪ್ಪ, ಆಲೂರಿನ ಕೆ.ಎಸ್. ಸಿದ್ದಲಿಂಗಪ್ಪ, ಗಿರೀಶ್‌ ಹಂಪೋಳ್‌,  ವಿನೋದಮ್ಮ ರೇವಣಸಿದ್ದಪ್ಪ, ಹಾಲಮ್ಮ ರೇವಣಸಿದ್ದಪ್ಪ, ಅಜ್ಜನಗೌಡ್ರು, ಎಂ.ಟಿ. ಪ್ರಕಾಶ್‌, ಅರುಣ್‌ಕುಮಾರ್‌, ರಾಜಶೇಖರ್‌, ಶಿವು, ರವಿಕುಮಾರ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!