ಜಿಲ್ಲಾ ಜೆಡಿಎಸ್‌ನಿಂದ ಮಹಾಪೌರ ಎಸ್.ಟಿ. ವೀರೇಶ್‌ಗೆ ಸನ್ಮಾನ

ದಾವಣಗೆರೆ, ಮಾ. 1- ಜಿಲ್ಲಾ ಜೆಡಿಎಸ್‌ನ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜೆ.ಅಮಾನುಲ್ಲಾ ಖಾನ್ ರವರ ನೇತೃತ್ವದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ನೂತನ ಮಹಾ ಪೌರರಾಗಿ ಆಯ್ಕೆಗೊಂಡ ಎಸ್.ಟಿ. ವೀರೇಶ್ ಅವರಿಗೆ ಸನ್ಮಾನಿಸಿ, ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಟಿ. ಅಜ್ಗರ್. ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಯು.ಎಂ. ಮನ್ಸೂರ್ ಅಲಿ. ದಕ್ಷಿಣ ವಕ್ತಾರ ಖಾದರ್ ಬಾಷಾ. ಜಿಲ್ಲಾ ಕಾರ್ಯದರ್ಶಿ ಫಾರೂಕ್ ಆಸೀಫ್ ಅಲಿ ಮತ್ತಿತರರಿದ್ದರು.

error: Content is protected !!