ಸಾಮಾನ್ಯ ಕಾರ್ಯಕರ್ತ ಉನ್ನತ ಸ್ಥಾನ ಪಡೆಯಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ

ಮೇಯರ್ ಆಗಿ ವೀರೇಶ್ : ಕಾರ್ಯಕರ್ತರಲ್ಲಿ ಹುಮ್ಮಸ್ಸು

ದಾವಣಗೆರೆ, ಮಾ.1 – ವಿದ್ಯಾರ್ಥಿ ದಿಸೆಯಿಂದಲೂ ಎ.ಬಿ.ವಿ.ಪಿ, ವಿಶ್ವ ಹಿಂದೂ ಪರಿಷತ್‍, ಭಜರಂಗದಳದಲ್ಲಿ ಕಾರ್ಯಕರ್ತರಾಗಿ ಹೋರಾಟಗ ಳನ್ನು ಮಾಡುತ್ತಾ ಬಂದು, ಮಹಾನಗರ ಪಾಲಿಕೆ ಸದಸ್ಯನಾಗಿ, ಈಗ ನೂತನ ಮೇಯರ್‍ ಆಗಿ ಎಸ್‍.ಟಿ. ವೀರೇಶ್ ಆಯ್ಕೆಯಾಗಿರುವುದಕ್ಕೆ ಬಿಜೆಪಿ ಕಾನೂನು ಪ್ರಕೋಷ್ಠದ ಹೆಚ್‍.ದಿವಾಕರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಒಬ್ಬ ಕಾರ್ಯಕರ್ತ ಮೇಯರ್‍ ಆಗಬಹುದು ಎಂಬುದು ಬಿ.ಜೆ.ಪಿಯಲ್ಲಿ ಮಾತ್ರ ಸಾಧ್ಯ. ಎಸ್.ಟಿ. ವೀರೇಶ್‍ ಅವರನ್ನು ಮೇಯರ್‌  ಮಾಡಿದ್ದರಿಂದಾಗಿ ಬಿಜೆಪಿಯ ಹಿರಿಯ ಕಾರ್ಯಕರ್ತರಲ್ಲಿ ಹೊಸದಾದ ಹುಮ್ಮಸ್ಸು ಬಂದಂತಾಗಿದೆ. ಮೇಯರ್ ತಮ್ಮ ಅಧಿಕಾರವಧಿಯಲ್ಲಿ ಉತ್ತಮ ಕೆಲಸ ಮತ್ತು ಆಡಳಿತ ನಡೆಸಲಿ ಎಂದು ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಎ.ಸಿ. ರಾಘವೇಂದ್ರ, ಸಹ ಸಂಚಾಲಕ ಕೆ.ಹೆಚ್‍. ಧನಂಜಯ್, ಅಧಿವ್ಯಕ್ತ ಪರಿಷತ್ತಿನ ಜಿಲ್ಲಾಧ್ಯಕ್ಷ ಎಲ್.ದಯಾನಂದ, ಎ.ಎಸ್‍. ಮಂಜುನಾಥ್‌, ಪಿ.ವಿ. ಶಿವಕುಮಾರ್‌ ಮತ್ತಿತರಿದ್ದರು.

error: Content is protected !!