ಮಾರಕ ರೋಗ ದೂರಮಾಡಲು ತಪ್ಪದೇ ಲಸಿಕೆ ಹಾಕಿಸಿ : ಶಾರದಾಬಾಯಿ

ಕೂಡ್ಲಿಗಿ, ಫೆ. 27- ಮಕ್ಕಳನ್ನು ಮಾರಕ ರೋಗಗಳಿಂದ ದೂರ ಮಾಡಲು ತಪ್ಪದೇ ಲಸಿಕೆ ಹಾಕಿಸುವಂತೆ ಮಕ್ಕಳ ಪೋಷಕರಿಗೆ ಕೂಡ್ಲಿಗಿ ಪ.ಪಂ. ಅಧ್ಯಕ್ಷೆ ಶಾರದಾಬಾಯಿ ಕಿವಿ ಮಾತು ಹೇಳಿದರು.

ಅವರು ಸೋಮವಾರ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿರುವ ಸರ್ಕಾರದ ತೀವ್ರಗೊಂಡ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.                                                                              

ಪ.ಪಂ. ಸದಸ್ಯರಾದ ರೇಣುಕಾಶ್ರೀ ದುರುಗೇಶ್‌, ತಿಮ್ಮಲಾಪುರ ಪಿಹೆಚ್ ಸಿ ಯ ಕಿರಿಯ ಆರೋಗ್ಯ ಸಹಾಯಕಿ ಗಿರಿಜಾ ಅಂಜಿನಪ್ಪ ಮಾತನಾಡಿದರು.                                 

ಈ ಸಂದರ್ಭದಲ್ಲಿ ಅಂಬೇಡ್ಕರ್ ಶಾಲೆಯ ಮುಖ್ಯಗುರುಗಳಾದ ವಸಂತ ಹಾಗೂ ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.

error: Content is protected !!