ವೀರೇಶ್ವರ ಪುಣ್ಯಾಶ್ರಮದ ಮುಂದಿನ ಟಾರ್ ರಸ್ತೆಗೆ ಆಯುಕ್ತರ ಸಮ್ಮತಿ

ದಾವಣಗೆರೆ, ಏ.25- ನಗರಕ್ಕೆ ಸಮೀಪದ ಬಾಡಾ ಕ್ರಾಸ್ ಬಳಿ ಇರುವ ಶ್ರೀ ವೀರೇಶ್ವರ ಪುಣ್ಯಾಶ್ರಮದ ಮುಂದಿನ ರಸ್ತೆಯನ್ನು ಟಾರ್ ರಸ್ತೆಯನ್ನಾಗಿ ಮಾಡಲು ಮಹಾನಗರಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ ತಮ್ಮ ಸಮ್ಮತಿ ಸೂಚಿಸಿದರು.  

ಅವರು ಆಶ್ರಮಕ್ಕೆ ಭೇಟಿ ನೀಡಿ, ಟಾರ್ ರಸ್ತೆ ಕಾಮಗಾರಿಯನ್ನು ತಕ್ಷಣ ಆರಂಭಿಸಲು ಎಇಇ ಪ್ರದೀಪ್ ಮತ್ತು ಇತರೆ ಇಂಜಿನಿಯರ್‍ಗಳಿಗೆ ಆದೇಶಿಸಿ ದರು. ಆಶ್ರಮದ ಸಮಿತಿಯವರು ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಅವರಿಗೂ ರಸ್ತೆ ಕಾಮಗಾರಿ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಆಯುಕ್ತರ ಭೇಟಿ ಸಂದರ್ಭದಲ್ಲಿ ಆಶ್ರಮದ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿಸ್ವಾಮಿ, ಸಹ ಕಾರ್ಯದರ್ಶಿ ಜೆ.ಎನ್.ಕರಿಬಸಪ್ಪ, ನಿರ್ದೇಶಕ ಬಸವನಗೌಡ್ರು, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು ಮತ್ತಿತರರಿದ್ದರು.

error: Content is protected !!