ಸಂಘಟನಾ ಚತುರನಿಗೆ ಅಧಿಕಾರ : ಸಂಸದ – ಶಾಸಕರ ನಿರ್ಧಾರಕ್ಕೆ ಸ್ವಾಗತ

ಸಂಘಟನಾ ಚತುರನಿಗೆ ಅಧಿಕಾರ : ಸಂಸದ - ಶಾಸಕರ ನಿರ್ಧಾರಕ್ಕೆ ಸ್ವಾಗತ - Janathavaniದಾವಣಗೆರೆ,ಫೆ. 25 – ತುಂಬಾ ಕುತೂಹಲ ಕೆರಳಿಸಿದ್ದ ದಾವಣಗೆರೆ ಮಹಾ ನಗರ ಪಾಲಿಕೆ ಮಹಾಪೌರರ ಚುನಾವಣೆಯಲ್ಲಿ ತುಂಬಾ ಚಾಣಕ್ಷತೆ ತೋರಿ ಅಪ್ಪಟ ದೇಶಭಕ್ತ ಸಂಘಟನಾ ಚತುರ ಎಸ್.ಟಿ.ವಿರೇಶ್ ಅವರನ್ನು ಆಯ್ಕೆ ಮಾಡುವಲ್ಲಿ ಸಂಸದ  ಸಿದ್ದೇಶ್ವರ ಹಾಗೂ ಶಾಸಕ  ರವೀಂದ್ರನಾಥ ಅವರ  ಕಾರ್ಯ ನಡತೆ ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾ ಶೋಷಿತ ವರ್ಗದ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬಾಡದ ಆನಂದರಾಜ್ ತಿಳಿಸಿದ್ದಾರೆ.

1992 ರಿಂದಲೂ ನಮ್ಮ ಜೊತೆ ಜೊತೆಯಲ್ಲಿ ವಿದ್ಯಾರ್ಥಿ ಪರಿಷತ್ತಿನಿಂದ ಸಂಘ ಪರಿವಾರದ ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತನಾಗಿ, ಗೋ ಹತ್ಯೆ ನಿಷೇಧದ ಸಂಘಟನೆ, ಜನಪರ, ಜೀವಪರ ಹೋರಾಟಗಾರನಿಗೆ ಒಂದಲ್ಲೊಂದು ದಿನ ಒಳ್ಳೆಯ ಅವಕಾಶ ಬರುತ್ತೆ ಎಂಬುದಕ್ಕೆ ಸ್ನೇಹಜೀವಿ ಎಸ್.ಟಿ.ವಿರೇಶ್ ರವರು ಇಂದು ನೂತನವಾಗಿ ದಾವಣಗೆರೆ ಮಹಾಪೌರರಾಗಿ ಅಧಿಕಾರ ಸ್ವೀಕರಿಸಲು ತಂತ್ರ ಬಳಸಿದ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರರವರ ಕಾರ್ಯವನ್ನು ಆನಂದರಾಜ್ ಶ್ಲಾಘಿಸಿದ್ದಾರೆ.

error: Content is protected !!