ಎನ್.ಜಿ.ಪಿ. ನಿವಾಸಕ್ಕೆ ಭಾಸ್ಕರ್ ರಾವ್ ಭೇಟಿ

ದಾವಣಗೆರೆ, ಏ.22- ರಾಜ್ಯದ ರೈಲ್ವೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಭಾಸ್ಕರ್ ರಾವ್ ಅವರು ಇಂದು ಸಂಜೆ ನಗರದ ಬಿಜೆಪಿ ಹಿರಿಯ ಮುಖಂಡ ಎನ್.ಜಿ. ಪುಟ್ಟಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ್ದರು.

ಬೆಂಗಳೂರಿನಿಂದ ಬೆಳಗಾವಿಗೆ ತೆರಳುವ ಮಾರ್ಗ ಮಧ್ಯೆ ಎನ್.ಜಿ.ಪಿ. ನಿವಾಸಕ್ಕೆ ಆಗಮಿಸಿದ್ದು,  ಭಾಸ್ಕರ್ ರಾವ್ ಅವರನ್ನು ಪುಟ್ಟಸ್ವಾಮಿ ಮತ್ತು ಅವರ ಕುಟುಂಬ ವರ್ಗದವರು ಸತ್ಕಾರ ನೀಡಿ ಸನ್ಮಾನಿಸಿ, ಗೌರವಿಸಿದರು.

ಎಸ್ಪಿ ಹನುಮಂತರಾಯ, ಮುಖಂಡ ಮುದೇಗೌಡ್ರ ವಿಶ್ವನಾಥ್, ಹಿರಿಯ ಪತ್ರಕರ್ತ ಕೆ. ಚಂದ್ರಣ್ಣ, ನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಎನ್. ಶಿವಕುಮಾರ್, ವರ್ತಕರಾದ ಕಿರಣ್ ವಾಲಾವಲ್ಕರ್, ರಾಮ್ ಜೀ, ವಿದ್ಯಾನಗರ ಠಾಣೆ ಸಬ್ ಇನ್ ಸ್ಪೆಕ್ಟರ್ ರೂಪಾ ತೆಂಬದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!