27ನೇ ವಾರ್ಡ್‌ನಲ್ಲಿ ಪೌರ ಕಾರ್ಮಿಕರಿಗೆ ತಿಂಡಿ ವಿತರಣೆ

ದಾವಣಗೆರೆ, ಏ.3- ಕೊರೊನಾ ವೈರಸ್ ನಿಂದ ಲಾಕ್ ಡೌನ್ ಆಗಿರುವುದರಿಂದ 27ನೇ ವಾರ್ಡ್‌ನಲ್ಲಿ ವಾರ್ಡ್ ನ ಪಾಲಿಕೆ ಸದಸ್ಯೆ ಯಶೋಧ ಹೆಗ್ಗಪ್ಪ ಹಾಗೂ ಉಪ ಮೇಯರ್ ಸೌಮ್ಯ ನರೇಂದ್ರ ನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ತಿಂಡಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಗೋಪಾಲ್ ರಾವ್ ಸಾವಂತ್, ನಾಮ ನಿರ್ದೇಶಕ ಸದಸ್ಯೆ ಹೆಚ್.ಸಿ. ಜಯಮ್ಮ ಇದ್ದರು.

error: Content is protected !!