ದಾವಣಗೆರೆ, ಏ.04- ಅಂದನೂರು ಮುರಿಗೆಪ್ಪ ಅಂಡ್ ಬ್ರದರ್ಸ್ ಹಾಗೂ ಜ್ಯೋತಿ ಗ್ಯಾಸ್ ಏಜೆನ್ಸಿ ವತಿಯಿಂದ ದಾನಿ ಅಂದನೂರು ಕೊಟ್ರಪ್ಪನವರು ಪ್ರಧಾನಮಂತ್ರಿ ಪರಿಹಾರ ನಿಧಿಗೆ ರೂ. 50 ಸಾವಿರ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 50 ಸಾವಿರಗಳನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಚೆಕ್ ಮೂಲಕ ವಿತರಿಸಿದರು. ಈ ಸಂದರ್ಭದಲ್ಲಿ ಅಂದನೂರು ಬಸವರಾಜ್, ಶಂಕರ್ ಉಪಸ್ಥಿತರಿದ್ದರು.
July 3, 2024