24 ನೇ ವಾರ್ಡಿನಲ್ಲಿ ಕೋವಿಡ್ ಲಸಿಕೆ ಅಭಿಯಾನ

ದಾವಣಗೆರೆ, ಏ. 22- ನಗರದ 24 ನೇ ವಾರ್ಡಿನ ಸೂಪರ್ ಮಾರ್ಕೆಟ್ ನಲ್ಲಿರುವ ಪ್ರಾಥ ಮಿಕ ಚಿಕಿತ್ಸಾ ಕೇಂದ್ರದಲ್ಲಿ ಲಸಿಕೆ ಅಭಿಯಾನಕ್ಕೆ ಶಾಸಕ ಎಸ್.ಎ. ರವಿಂದ್ರನಾಥ್,  ಮಹಾಪೌರ ಎಸ್.ಟಿ‌ ವೀರೇಶ್  ಚಾಲನೆ ನೀಡಿದರು.

ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಮುಂಜಾಗ್ರತ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾ ವಾರ್ಡ್ ಮಟ್ಟದ ಲಸಿಕೆ ಅಭಿಯಾನದಲ್ಲಿ ಹಿರಿಯ ನಾಗರಿಕರು ಬಂದು ಲಸಿಕೆ ಹಾಕಿಸಿ ಕೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ  ಮಾಜಿ ಮುಖ್ಯ ಸಚೇತಕ ಡಾ|| ಶಿವಯೋಗಿ ಸ್ವಾಮಿ, ಮಾಜಿ ಮೇಯರ್ ಸುಧಾ ಜಯರುದ್ರೇಶ್, ಬಿಜೆಪಿ ಮುಖಂಡ ಕಲ್ಲೇಶ್, ವಾರ್ಡ್ ಪ್ರಮುಖರಾದ ಪದ್ಮನಾಭ ಶೆಟ್ರು, ಜೆ. ಕಿರಣ್ ಕುಮಾರ್, ಶೇಖರ್ ಉಪ್ಪಿನ್ ಉಪಸ್ಥಿತರಿದ್ದರು. ಪ್ರೊ. ನರಸಿಂಹಯ್ಯ ಈ ಸಂದರ್ಭದಲ್ಲಿ ‌ಲಸಿಕೆ ಪಡೆದುಕೊಂಡರು.

error: Content is protected !!