ಸಚಿವರಿಂದ 3 ಆಂಬ್ಯುಲೆನ್ಸ್ ಬಿಡುಗಡೆ

ರಾಣೇಬೆನ್ನೂರು, ಜು.10-  ತಾಲ್ಲೂ ಕಿನ ತುಮ್ಮಿನಕಟ್ಟೆ, ಮೆಡ್ಲೇರಿ ಹಾಗೂ ನಗರದ ಅಂಜುಮನ್ ಸಂಸ್ಥೆಯವರಿಗೆ ತಮ್ಮ ಅನುದಾನದಲ್ಲಿ ತರಲಾದ  ಮೂರು ಆಂಬ್ಯುಲೆನ್ಸ್‌ಗಳನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ  ಸಚಿವ ಆರ್‌. ಶಂಕರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ,  ವಾಯವ್ಯ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಿರ್ದೇಶಕ ಸಂತೋಷ್‌ ಪಾಟೀಲ್, ಗಂಗಾ ಬ್ಯಾಂಕ್ ಅಧ್ಯಕ್ಷ ರತ್ನಾಕರ ಕುಂದಾಪುರ, ಚನ್ನೇಶ್ ಬ್ಯಾಂಕ್ ಅಧ್ಯಕ್ಷ ಕೆ. ಶಿವಲಿಂಗಪ್ಪ,  ನಗರಸಭೆ ಸದಸ್ಯೆ ಗಂಗಮ್ಮ ಹಾವನೂರ, ತಿಳವಳ್ಳಿ ಪ್ರಭಾವತಿ, ರಾಜು ಅಡಿವೆಪ್ಪನವರ, ನೂರುಲ್ಲಾ ಖಾಜಿ, ಅಂಜುಮನ್ ಆಡಳಿತಾಧಿಕಾರಿ ಪಿ.ಜಿ. ಹಾವೇರಿ ಇನ್ನಿತರರಿದ್ದರು.

error: Content is protected !!