ಆಟೋರಿಕ್ಷಾಗೆ ಬೆಂಕಿ: ಬಡ ಕುಟುಂಬಕ್ಕೆ ನೆರವು

ದಾವಣಗೆರೆ, ಏ.27- ಆನೆಕೊಂಡ ಪೇಟೆಯ ಮಂಜುನಾಥ್ ಅವರ ಆಟೋರಿಕ್ಷಾ ಆಕಸ್ಮಿಕವಾಗಿ ಬೆಂಕಿಗೆ ತುತ್ತಾಗಿ, ಸುಟ್ಟು ಕರಕಲಾಗಿದ್ದು, ಅವರ ಕುಟುಂಬಕ್ಕೆ 10ನೇ ವಾರ್ಡ್‌ನ ಪಾಲಿಕೆ ಸದಸ್ಯ ರಾಕೇಶ್ ಯಶವಂತರಾವ್ ಜಾಧವ್ ನೆರವಿಗೆ ಧಾವಿಸಿ, 5,000 ರೂಪಾಯಿ ಪರಿಹಾರ ಧನ ಹಾಗೂ ಆಹಾರ ಸಾಮಗ್ರಿಗಳ ಕಿಟ್‌ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಪಾಲಿಕೆ ಸದಸ್ಯ ಶಿವನಗೌಡ ಟಿ. ಪಾಟೀಲ, ಸೋಗಿ ಶಾಂತಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ಗೋಪಾಲ್ ರಾವ್ ಮಾನೆ, ಆನಂದ ಹಿರೇಮಠ, ಶಶಿಧರ್, ಇಸ್ತ್ರಿ ರಾಜು, ಪವನ್, ಮುದ್ದಿ ವಿಜಯಕುಮಾರ್ ಹಾಗೂ ಇತರರಿದ್ದರು.

error: Content is protected !!