ಲೈಫ್ ಲೈನ್-ರೆಡ್ ಕ್ರಾಸ್‌ನಿಂದ ವಾಹನ ಸವಾರರಿಗೆ ಆಹಾರ ವಿತರಣೆ

ದಾವಣಗೆರೆ, ಮೇ 1- ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಆಹಾರವನ್ನು ಕಳೆದ 15 ದಿನಗಳಿಂದ ವಿತರಿಸಲಾಗುತ್ತಿದೆ.
ಕೊರೊನಾ ವೈರಸ್ ಲಾಕ್ ಡೌನ್ ಪರಿಣಾಮ ಹೋಟೆಲ್ ಲಾಕ್ ಆಗಿರುವುದರಿಂದ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು. ಲಾರಿ, ಕಾರು ಸೇರಿದಂತೆ ಎಲ್ಲಾ ವಾಹನ ಸವಾರರಿಗೂ ಆಹಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಎ.ಎಂ. ಶಿವಕುಮಾರ್, ಕಾರ್ಯದರ್ಶಿ ಅನಿಲ್ ಬಾರೆಂಗಳ್, ಪೃಥ್ವಿ ಬಾದಾಮಿ, ಶೇಷಾಚಲ, ವಸಂತರಾಜು, ಗಾಯಕ್ ವಾಡ್ ಸಂತೋಷ, ಕೆ.ಎಂ. ಶ್ರೀಕಾಂತ್, ರಜತ್, ನಟರಾಜ್, ಹೇಮ ಚಂದ್ರ ಜೈನ್, ಮೋಹನ್ ಕುಮಾರ್, ಟಿ. ಕರಿಬಸಪ್ಪ, ಗೋಪಾಲಕೃಷ್ಣ, ಪರಶುರಾಮ, ಆನಂದ ಜ್ಯೋತಿ, ಡಾ. ಶಿಲ್ಪಶ್ರೀ ಇದ್ದರು.

error: Content is protected !!