ರೈತರ ಬೆಂಬಲಾರ್ಥ ದೆಹಲಿ ಚಲೋ

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ಆತಿಥ್ಯ

ದಾವಣಗೆರೆ, ಜು.10- ದೆಹಲಿಯಲ್ಲಿ ನಡೆದಿರುವ ರೈತರ ಪರ ಹೋರಾಟದ (ರೈತರಿಗೆ ಬೆಂಬಲ ಬೆಲೆ ನೀಡುವ ಕಾನೂನು ಕುರಿತು) ಬೆಂಬಲಾರ್ಥ ಹಾಗೂ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲಿಕ್ಕಾಗಿ ನಾಗರಾಜ ಬಾಗಲಕೋಟೆ  ಅವರು ಮಹಾಬಲೇಶ್ವರ ಬೆಟ್ಟದಿಂದ ದೆಹಲಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಇವರ ಪಾದಯಾತ್ರೆ ನಗರಕ್ಕೆ ಆಗಮಿಸಿದಾಗ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಲ್ಲಿ ಅವರಿಗೆ ವಸತಿ ಕಲ್ಪಿಸಲಾಯಿತು. 

ಕರುಣಾ ಟ್ರಸ್ಟಿನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಅವರು ನಾಗರಾಜ್‌ ಅವರೊಂದಿಗೆ ಪಾದಯಾತ್ರೆಯ ಗುರಿ, ಉದ್ದೇಶಗಳ ಕುರಿತು ಚರ್ಚಿಸಿದರು. 

error: Content is protected !!