ಹರಪನಹಳ್ಳಿ: ಕುರಿ ವ್ಯಾಪಾರ ಸ್ಥಗಿತ

ಹರಪನಹಳ್ಳಿ, ಏ.19- ಕೊರೊನಾ ಕಾರಣದಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ  ಜರುಗುವ ಕುರಿ ಮತ್ತು ಮೇಕೆ ವ್ಯಾಪಾರವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎ.ಕೆ. ವೀರಣ್ಣ ತಿಳಿಸಿದ್ದಾರೆ.

ಪಟ್ಟಣದ ಕೊಟ್ಟೂರು ರಸ್ತೆಯ ಅಡವಿಹಳ್ಳಿ ಕ್ರಾಸ್ ಹತ್ತಿರ ನಡೆಯುವ  ಕುರಿ ಸಂತೆಯನ್ನು ಏ.30 ರವರೆಗೆ ಸ್ಥಗಿತಗೊಳಿ ಸಲು ಆದೇಶಿಸಲಾಗಿದೆ. ಕೋವಿಡ್ ನಿಯಮಗಳನ್ನು ಯಾವುದೇ ವ್ಯಕ್ತಿಗಳು ಉಲ್ಲಂಘಿಸಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ  ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. 

error: Content is protected !!