ಹಿಲ್‌ಸೈಡ್ ವೈದ್ಯರಾಗಿ ಅಂಜುಂ-ಭೂಮಿಕಾ ಆಯ್ಕೆ

ಹರಪನಹಳ್ಳಿ, ಫೆ.12- ಬೆಂಗಳೂರಿನ ಹಿಲ್‌ಸೈಡ್‌ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡಿದ್ದ ತಾಲ್ಲೂಕಿನ ಇಬ್ಬರು ಯುವತಿಯರು ಅದೇ ಸಂಸ್ಥೆಯಲ್ಲಿ ವೈದ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷರು ಹಾಗೂ ಮೇಲ್ಕಂಡ ವಿದ್ಯಾಸಂಸ್ಥೆಯ ಮಾಲೀಕರೂ ಆದ  ಶಂಕರನಹಳ್ಳಿ ಡಾ. ಉಮೇಶ್ ಬಾಬು ತಿಳಿಸಿದ್ದಾರೆ.

ತಾಲ್ಲೂಕಿನ ಜಾಕೀರ್ ಹುಸೇನ್ ಅವರ ಪುತ್ರಿ ಅಂಜುಮ್ ಬಾನು ಆಯುರ್ವೇದ ವೈದ್ಯಕೀಯ ಕೋರ್ಸ್‌ನಲ್ಲಿ ಶೇ. 67.5 ರಷ್ಟು ಫಲಿತಾಂಶ ಪಡೆದುಕೊಂಡು ಆಯುರ್ವೇದ ವೈದ್ಯರಾಗಿ ಆಯ್ಕೆಯಾಗಿದ್ದಾರೆ. ಹಾಗೂ ವಕೀಲ  ಎಂ. ಅಜ್ಜಣ್ಣನವರ ಪುತ್ರಿ ಭೂಮಿಕ ಶೇ.60 ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ವೈದ್ಯರಾಗಿ ಆಯ್ಕೆಯಾಗಿದ್ದಾರೆ.

ವೈದ್ಯರಾಗಿ ಆಯ್ಕೆಯಾದವರಿಗೆ ಪ್ರಮಾಣ ಪತ್ರ ಹಾಗೂ ಗೋಲ್ಡ್ ಮೆಡಲ್ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಪ್ರಾಂಶುಪಾಲರು, ಅಧ್ಯಾಪಕರು   ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

error: Content is protected !!