ಜಿಗಳಿ : ಕಿಡಿಗೇಡಿಗಳ ಕೃತ್ಯಕ್ಕೆ ಪಂಚರ್ ಶಾಪ್ ಭಸ್ಮ

ಮಲೇಬೆನ್ನೂರು, ಫೆ. 13- ಜಿಗಳಿ ಗ್ರಾಮದಲ್ಲಿ ಬಸವರಾಜ್ ಅವರಿಗೆ ಸೇರಿದ ಪಂಚರ್ ಹಾಕುವ ಅಂಗಡಿ ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಸುಟ್ಟು ಭಸ್ಮವಾಗಿರುವ ಘಟನೆ ನಿನ್ನೆ ಬೆಳಗಿನ ಜಾವ ನಡೆದಿದೆ. ಪಂಚರ್ ಅಂಗಡಿಯಲ್ಲಿ ಹೊಸ ಟೈರ್, ಟ್ಯೂಬ್‌ಗಳು ಮತ್ತು ಬ್ಲೋ ಮಿಷನ್‌ ಇದ್ದವು ಎಂದು ಹೇಳಲಾಗಿದ್ದು, ಬೆಂಕಿಯಲ್ಲಿ ಎಲ್ಲವೂ ಸುಟ್ಟುಹೋಗಿವೆ. 

ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷೆ ಕರಿಯಮ್ಮ, ಉಪಾಧ್ಯಕ್ಷ ಆನಂದಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ವಿ. ನಾಗರಾಜ, ಬಿಳಸನೂರು ಚಂದ್ರಪ್ಪ, ಪಿಡಿಓ ದಾಸರ ರವಿ, ಗ್ರಾಮ ಲೆಕ್ಕಾಧಿಕಾರಿ ಸುಭಾನಿ ಅವರು ಭೇಟಿ ನೀಡಿ, ಪರಿಶೀಲಿಸಿ, ಪರಿಹಾರದ ಭರವಸೆ ನೀಡಿದರು.

error: Content is protected !!