ಎಸ್ಮಾ ಜಾರಿ ಸಮಸ್ಯೆಗೆ ಪರಿಹಾರವಲ್ಲ: ರೈತ ಸಂಘ

ರಾಣೇಬೆನ್ನೂರು, ಏ.9-  ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ, ಬಲ ಪ್ರಯೋಗ, ಚಂದ್ರಶೇಖರ ಮೇಲೆ ಆಪಾದನೆ ಇದು ಪರಿಹಾರವಲ್ಲ. ಸರ್ಕಾರ ಈ ನೀತಿಯನ್ನು ಕೈಬಿಟ್ಟು ರಾಜ್ಯ ಸಾರಿಗೆ ನೌಕರರ  ಬೇಡಿಕೆಗಳನ್ನು ಪೂರೈಸುವಲ್ಲಿ ಚಿಂತಿಸಬೇಕು ಎಂದು ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಸರ್ಕಾರ ಈ ಬಗ್ಗೆ ಶೀಘ್ರವಾಗಿ ಕ್ರಮಕೈಗೊಳ್ಳದಿದ್ದರೆ ಹೋರಾಟ ಉಗ್ರರೂಪ ತಾಳಲಿದೆ ಎಂದು ಎಚ್ಚರಿಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ದಿನಗೂಲಿ ನೌಕರರ ಸಂಘದ ಬಸವರಾಜ ಕೊಂಗಿ, ಜೆಡಿಎಸ್ ಮುಖಂಡರಾದ ಎಸ್.ಡಿ. ಹಿರೇಮಠ, ಸುರೇಶ ಗರಡಿಮನಿ, ಹರಿಹರಗೌಡ ಪಾಟೀಲ,ಡಿಳ್ಳೆಪ್ಪ ಸತ್ಯಪ್ಪನವರ, ಮರಡೆಪ್ಪ ಚಳಗೇರಿ ಮತ್ತಿತರರಿದ್ದರು.

error: Content is protected !!