ಹೆಚ್.ಬಿ. ಗಿರೀಶ್‌ಗೆ ಚಿನ್ನದ ಪದಕ

ದಾವಣಗೆರೆ, ಏ.9- ದಾವಣಗೆರೆ ವಿಶ್ವವಿದ್ಯಾ ನಿಲಯದ ವಿದ್ಯಾರ್ಥಿ ಹೆಚ್.ಬಿ. ಗಿರೀಶ್ ಅವರು ಎಂ.ಎಸ್ಸಿ. ಭೂವಿಜ್ಞಾನ ವಿಭಾಗದಲ್ಲಿ ಮೊದಲ ರಾಂಕ್ ನೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ನಿನ್ನೆ ನಡೆದ ದಾವಣಗೆರೆ ವಿವಿ ಘಟಿಕೋತ್ಸವದಲ್ಲಿ ಕುಲಪತಿ ಪ್ರೊ. ಎಸ್.ವಿ. ಹಲಸೆ ಅವರು ಗಿರೀಶ್ ಅವರಿಗೆ ಪದಕ ಪ್ರದಾನ ಮಾಡಿದರು. ಗಿರೀಶ್, ದಿ. ಶ್ರೀಮತಿ ಕಮಲಮ್ಮ ಮತ್ತು ದಿ. ಗೌಡ್ರ ಶಂಕ್ರಪ್ಪ ದಂಪತಿ ಮೊಮ್ಮಗ ಹಾಗೂ ಶ್ರೀಮತಿ ಜಿ. ಭಾರತಿ ಮತ್ತು ಹೆಚ್.ಜೆ. ಬಸವರಾಜಪ್ಪ ಅವರ ಪುತ್ರ. ಗಿರೀಶ್ ಅವರನ್ನು ಮಾಜಿ ಮೇಯರ್ ಹೆಚ್.ಬಿ. ಗೋಣಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಂ. ಮಂಜುನಾಥ್, ವರ್ತಕ ಹೆಚ್.ಎಂ. ಗೋಣಪ್ಪ, ಆರ್ ಐ ಅಜ್ಜಪ್ಪ ಪತ್ರೆ, ಶ್ರೀಮತಿ ಗೀತಾ ಜಿ.ಎಸ್. ಭರಮರಾಜ್, ನಂದನಗೌಡ್ರು, ನೂತನಗೌಡ್ರು, ಪಿ. ಲಿಂಗರಾಜ್‌ ಅಭಿನಂದಿಸಿದ್ದಾರೆ.

error: Content is protected !!