ರಾಜನಹಳ್ಳಿ ವಾಲ್ಮೀಕಿ ಜಾತ್ರೆ : ಪಾದಯಾತ್ರೆಗೆ ಚಾಲನೆ

ಹರಪನಹಳ್ಳಿ, ಫೆ.7- ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಜರುಗಲಿರುವ ಮೂರನೇ ವರ್ಷದ ವಾಲ್ಮೀಕಿ ಜಾತ್ರೆಗೆ ಪಾದಯಾತ್ರೆ ಹೊರಟ ವಾಲ್ಮೀಕಿ ನಾಯಕ ಸಮಾಜದ ಬಂಧುಗಳಿಗೆ ಪಟ್ಟಣದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.

ಈ ವೇಳೆ ವಾಲ್ಮೀಕಿ ಜಾತ್ರಾ ಸಮಿತಿ ತಾಲ್ಲೂಕು  ಅಧ್ಯಕ್ಷ  ಹೆಚ್.ಕೆ. ಹಾಲೇಶ್, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ  ಕೋರಿಶೆಟ್ಟಿ ಉಚ್ಚೆಂಗೆಪ್ಪ, ಉಪಾಧ್ಯಕ್ಷ ಶಿವಾನಂದ, ಪ್ರಧಾನ ಕಾರ್ಯದರ್ಶಿ ಗಿರಜ್ಜಿ ನಾಗರಾಜ್,  ಸಂಘಟನಾ ಕಾರ್ಯದರ್ಶಿಗಳಾದ ನೀಲಗುಂದ ತಿಮ್ಮೇಶ್,  ದ್ಯಾಪನಾಯಕನಳ್ಳಿ ಜಿ.ಕೆ. ಬಸವರಾಜ್, ಬಾನಳ್ಳಿ ಕೆಂಚನಗೌಡ, ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ವಾಲ್ಮೀಕಿ ಸೇವಾ ಸಮಿತಿಯ ಹಳ್ಳಿಕೇರಿ ಎಚ್.ರಾಜಪ್ಪ,  ಎಂ.ಪ್ರಾಣೇಶ್, ಏಕಲವ್ಯ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ರಾಯದುರ್ಗದ ಪ್ರಕಾಶ್, ವಾಲ್ಮೀಕಿ ನಾಯಕ  ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಗೌರವ ಅಧ್ಯಕ್ಷೆ ಟಿ.ಪದ್ಮಾವತಿ, ಕಾರ್ಯದರ್ಶಿ ಕೆ.ಸುಜಾತ, ಮಂಜುಳಾ, ಪವಿತ್ರ, ಹನುಮಕ್ಕ, ಮುಖಂಡರಾದ ನೀಲಗುಂದ ಮನೋಜಾ, ಪಿ.ಪರಶುರಾಮ,  ಸಿ. ವೆಂಕಪ್ಪ,  ಪೂಜಾರ್ ಮಂಜುನಾಥ್, ಗಿಡ್ಡಳ್ಳಿ ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!