ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ

ದಾವಣಗೆರೆ, ಫೆ.7- ಅಯೋಧ್ಯೆಯ ರಾಮಮಂದಿರಕ್ಕೆ ನಿಧಿ ಸಂಗ್ರ ಹಣಾ ಅಭಿಯಾನವನ್ನು ನಗರದ ಎಂ.ಸಿ.ಸಿ. `ಬಿ’ ಬ್ಲಾಕ್ ನಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ 38ನೇ ವಾರ್ಡಿನ ಹಿರಿಯ ನಾಗರಿಕರಾದ ಹೆಚ್.ಸಿ. ಶ್ರೀಕಂಠಣ್ಣ ಕುಟುಂಬದವರು ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಿಸಿದರು. ಬಿಜೆಪಿ ಮುಖಂಡ ಶಿವಕುಮಾರ್ ಮಳಲ್ಕೆರೆ, ಬಿ.ಜಿ. ನಾಗರಾಜ್, ಕೆ.ಬಿ. ಮೋಹನ್ ರಾವ್, ಪ್ರಸಾದ್, ಸಿದ್ದಲಿಂಗಪ್ಪ, ಬಸವರಾಜಯ್ಯ, ಪ್ರಶಾಂತ್, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!