ಇಲೆವೆನ್ ಕ್ರಿಕೆಟ್ ಬ್ರದರ್ಸ್‌ನಿಂದ ಕ್ರಿಕೆಟ್ ಪಂದ್ಯಾವಳಿ

ದಾವಣಗೆರೆ,ಫೆ.4- ನಗರದ ಮಾತಾ ಅಮೃತಾನಂದಮಯಿ ಶಾಲಾ ಮೈದಾನದಲ್ಲಿ ಮೊನ್ನೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಾವಣಗೆರೆ ಇಲೆವೆನ್ ಪ್ರಥಮ ಸ್ಥಾನ ಗಳಿಸಿದರೆ, ದಾವಣಗೆರೆ ಇಲೆವೆನ್ ಬ್ರದರ್ಸ್ ದ್ವಿತೀಯ ಸ್ಥಾನ ಪಡೆದಿದೆ. ದೇವನಗರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಇಲೆವೆನ್ ಕ್ರಿಕೆಟ್ ಬ್ರದರ್ಸ್ ಇವರ ಜಂಟಿ ಆಶ್ರಯದಲ್ಲಿ ಸಮಾಜದ ಯುವ ಮುಖಂಡ ಶ್ರೀನಿವಾಸ್ ದಾಸಕರಿಯಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಈ ಪಂದ್ಯ ಏರ್ಪಾಡಾಗಿತ್ತು. 

ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ದಾವಣಗೆರೆ ಇಲೆವೆನ್ ಬ್ರದರ್ಸ್ ತಂಡದ ನಾಯಕ ಆರ್. ಚಂದ್ರಶೇಖರ್ ಹಾಗೂ ಮುಕ್ತಿಯಾರ್ ಅವರುಗಳು ಟ್ರೋಫಿ ಪಡೆದುಕೊಂಡರು. 

ನಗರ ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್, ಶ್ರೀನಿವಾಸ್ ದಾಸಕರಿಯಪ್ಪ, ಉದ್ಯಮಿ ಕೆ.ಎಸ್. ರಮೇಶ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

error: Content is protected !!