ನಗರಕ್ಕೆ ವೀರಶೈವ ಸಭಾದ ಉಮೇಶ್ ಪಾಟೀಲ್ ಭೇಟಿ

ದಾವಣಗೆರೆ,ಫೆ.3- ಅಖಿಲ ಭಾರತ ವೀರಶೈವ ಮಹಾಸಭಾ ವಾಣಿಜ್ಯ ಮತ್ತು  ಕೈಗಾರಿಕಾ ಘಟಕದ ರಾಷ್ಟ್ರೀಯ  ಅಧ್ಯಕ್ಷ ಉಮೇಶ್  ಹೆಚ್.  ಪಾಟೀಲ್ ಅವರು ನಿನ್ನೆ ನಗರಕ್ಕೆ  ಭೇಟಿ ನೀಡಿದ್ದರು.  ಬಾಪೂಜಿ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ  ವಾಣಿಜ್ಯ ಮತ್ತು ಕೈಗಾರಿಕಾ ಘಟಕದ ಕೇಂದ್ರ ಸಮಿತಿಗೆ ಬಸವನಾಳ  ಇಂಡಸ್ಟ್ರೀಸ್  ಮಾಲೀಕ ಶಂಭುಲಿಂಗಪ್ಪ ಬಸವನಾಳ ಅವರನ್ನು  ಕಾರ್ಯನಿರ್ವಾಹಕ ಸದಸ್ಯರನ್ನಾಗಿ ನೇಮಕ ಮಾಡಿದರು. 

ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಸದಸ್ಯ ಮಹಾಂತೇಶ್ ಪಾಟೀಲ್, ಉಪಾಧ್ಯಕ್ಷ  ಗೋಪನಗೌಡ ಪಾಟೀಲ್,  ದಾವಣಗೆರೆ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರು, ಉಪಾಧ್ಯಕ್ಷರೂ ಆದ ವಕೀಲ  ಕೊಂಡಜ್ಜಿ ಬಣಕಾರ್ ಶಿವಕುಮಾರ್, ಸ್ವದೇಶಿ ಸೋಲಾರ್ ಮಾಲೀಕ ಸಚಿನ್,  ಜಯ ಪ್ರಕಾಶ್ ಕೊಂಡಜ್ಜಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!