ಅಂಚೆ ಕಾರ್ಡಿನಲ್ಲಿ ಚಿತ್ರ ಬರೆಯುವ ಸ್ಪರ್ಧೆ

ದಾವಣಗೆರೆ, ಏ. 6- ನಗರದ  ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯಲ್ಲಿ  ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪೋಸ್ಟ್‌ ಕಾರ್ಡಿನಲ್ಲಿ ವಿಜ್ಞಾನ ಚಿತ್ರ ಚಿತ್ರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮನೋಹರ್ ಎಸ್. ಚಿಗಟೇರಿ ಅವರು ಅಂಚೆ ಕಾರ್ಡಿನ ಮೇಲೆ ರುಜು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಬಿ. ಶಾಂತಕುಮಾರಿ, ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ, ಕೆ.ಹಾಲಪ್ಪ , ಲಿಂಗರಾಜ ಗಾಜಿ, ಕೆ.ಪಿ. ರುದ್ರೇಶಮೂರ್ತಿ, ಹೆಚ್. ಶ್ವೇತ ಉಪಸ್ಥಿತರಿದ್ದರು.

ಶಾಲೆಯ ಹಿರಿಯ ಶಿಕ್ಷಕ ಬಿ.ಕೆ. ಹನುಮಂತಪ್ಪ ಸ್ವಾಗತಿಸಿದರು. ಜಿ.ಎಂ. ಪ್ರಭುದೇವ ನಿರೂಪಿಸಿದರು. ಜ್ಯೋತಿ  ಹೆಚ್.ಬಿ.  ವಂದಿಸಿದರು.

error: Content is protected !!