ಹಡಗಲಿ: ಅಧಿಕಾರಿಗಳ ನೇಮಕಕ್ಕೆ ಆಗ್ರಹ

ಹೂವಿನಹಡಗಲಿ, ಏ.6- ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ 4 ಜನ ಅಧಿಕಾರಿಗಳನ್ನು ನೇಮಕ ಮಾಡುವಂತೆ ರೈತ   ಸಂಘ ಆಗ್ರಹಿಸಿದೆ. 

ಹಣಕಾಸಿನ ಅವ್ಯವಹಾ ರದಲ್ಲಿ ಅಮಾನತ್ತಾಗಿರುವ ಕಾರಣ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ ಕಾಡುತ್ತಿದೆ. ಇದರಿಂದಾಗಿ ರೈತರ ಸಮಸ್ಯೆಗಳಿಗೆ ಮತ್ತು ಸೂಕ್ತ ಮಾರ್ಗದರ್ಶನಕ್ಕೆ ಅಡಚಣೆಯಾಗಿದೆ ಎಂದು ರೈತರು ಮನವಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಪ್ರಭಾರಿಯಾಗಿ ಹರಪನಹಳ್ಳಿಯ ಕೃಷಿ ನಿರ್ದೇಶಕರನ್ನು  ಇಲ್ಲಿಗೆ ನೇಮಿಸಲಾಗಿ ದ್ದರೂ, ಅವರು ರೈತರ ಸಮಸ್ಯೆಗೆ, ರೈತರ ಕಷ್ಟಗಳಿಗೆ  ನೆರವಾಗುತ್ತಿಲ್ಲ.  

ಖಾಯಂ ಅಧಿಕಾರಿಗಳಿದ್ದರೆ ರೈತರಿಗೆ ಅನುಕೂಲವಾಗಲಿದೆ. ಆದರೆ, ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು  ಸಂಘದ  ಅಂಚೆ ಮಂಜುನಾಥ, ಎಂ.ಶಿವಕುಮಾರ್, ಜಿ. ಮಹೇಂದ್ರ,  ಡಿ. ಗಿರೀಶ್ ಇನ್ನಿತರರು ಆರೋಪಿಸಿದ್ದಾರೆ.

error: Content is protected !!