ಕೂಡ್ಲಿಗಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕೂಡ್ಲಿಗಿ, ಏ.5- ಪಟ್ಟಣ ಪಂಚಾಯ್ತಿ 1ನೇ ವಾರ್ಡ್‌ನ ನೂತನ ಸದಸ್ಯೆ ಲೀಲಾವತಿ ಪ್ರಭಾಕರ ಅವರು ಬಾಬು ಜಗಜೀವನ ರಾಮ್ ಜಯಂತಿಯ ಅಂಗವಾಗಿ ಪೌರ ಕಾರ್ಮಿಕರ ಜೊತೆ ನಿಂತು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ವಿಎಸ್‌ಎಸ್‌ಎನ್ ಉಪಾಧ್ಯಕ್ಷ ನಲ್ಲಮುತ್ತಿ ದುರುಗೇಶ್, ಕಾಟಮಲ್ಲಿ ಕೊಟ್ರೇಶ್, ವೀರಭದ್ರ ಸ್ವಾಮಿ, ತಿಮ್ಮಾರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.

error: Content is protected !!