ಉಭಯ ಶ್ರೀಗಳಿಗೆ ಸ್ವಾಗತ

ದಾವಣಗೆರೆ,ಜ.30- 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಇಂದು ಬೆಳಿಗ್ಗೆ ಎಪಿಎಂಸಿ ಆವರಣ ಪ್ರವೇಶಿಸಿದ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ನಿರ್ದೇಶಕ ದೊಗ್ಗಳ್ಳಿ ಬಸವರಾಜ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್, ಎಪಿಎಂಸಿ ಕಾರ್ಯದರ್ಶಿ ಬಸವರಾಜ್ ದೊರೆಸ್ವಾಮಿ, ಸಹಾಯಕ ನಿರ್ದೇಶಕ ಪ್ರಭು, ಮಾಯಕೊಂಡದ ರುದ್ರಪ್ಪ, ಕಿತ್ತೂರು ವೀರಣ್ಣ, ಶಿವಪ್ರಕಾಶ್ ಅಣಜಿ, ಶಂಕರನಹಳ್ಳಿ ಪ್ರಭು ಮತ್ತಿತರರು ಶ್ರೀಗಳನ್ನು ಬರ ಮಾಡಿಕೊಂಡರು.

error: Content is protected !!