ಜಗಳೂರು ತಾಲ್ಲೂಕಿನಲ್ಲಿ ಸರ್ಕಾರಿ ಬಸ್ ಡಿಪೋಗಾಗಿ ಮನವಿ

ದಾವಣಗೆರೆ, ಜ.18- ಜಗಳೂರು ತಾಲ್ಲೂಕಿ ನಲ್ಲಿ ಸರ್ಕಾರಿ ಬಸ್ ಡಿಪೋ ಪ್ರಾರಂಭಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ವತಿಯಿಂದ ನಗರದಲ್ಲಿಂದು ನೂತನ ಬಸ್ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷ ಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಜಗಳೂರು ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಸರ್ಕಾರಿ ಬಸ್ ಗಳ ಸೇವೆ ಒದಗಿಸಬೇಕು ಹಾಗೂ ಜಗಳೂರಿನಲ್ಲಿ ಶೀಘ್ರವಾಗಿ ಸರ್ಕಾರಿ ಬಸ್ ಡಿಪೋ ಮಾಡಲು ಸ್ಥಳ ಗುರುತಿಸಿ ಅದನ್ನು ಅಂತಿಮಗೊಳಿಸಿ ಗುದ್ದಲಿ ಪೂಜೆ ಮಾಡಿ ಕಾರ್ಯ ಪ್ರಾರಂಭ ಮಾಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಗಳೂರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿಯೇ ಪಾಸ್ ಕೌಂಟರ್ ತೆರೆಯಬೇಕು ಎಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸರ್ಕಾರಿ ಬಸ್ ಉಳಿವಿ ಗಾಗಿ ಹಾಗೂ ಡಿಪೋ ಹೋರಾಟ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ, ಎಸ್ ಎಫ್ ಐ ಜಿಲ್ಲಾ ಮುಖಂಡ ರಾದ ಲಕ್ಷ್ಮಣ್ ನಾಯ್ಕ್, ಬಿ.ಎಮ್. ಅನಂತ ರಾಜ್, ಮೈಲೇಶ್, ಜಗಳೂರು ತಾಲ್ಲೂಕು ಅಧ್ಯಕ್ಷ ತಮಲೆಹಳ್ಳಿ ಅಂಜಿನಪ್ಪ, ಸಿಐಟಿಯು ಮುಖಂಡ ಕೆ.ಹೆಚ್. ಆನಂದರಾಜು ಸೇರಿದಂತೆ ಇತರರರಿದ್ದರು.

error: Content is protected !!