ಜಿಗಳಿಯಲ್ಲಿ ಶ್ರೀ ಗುರು ಸಿದ್ದರಾಮ ಜಯಂತಿ ಆಚರಣೆ

ಮಲೇಬೆನ್ನೂರು, ಜ.15- ಜಿಗಳಿ ಗ್ರಾ.ಪಂ. ಕಛೇರಿಯಲ್ಲಿ ಕಾಯಕಯೋಗಿ ಶ್ರೀ ಗುರು ಸಿದ್ದರಾಮೇಶ್ವರರ 848 ನೇ ಜಯಂತಿ ಆಚರಿಸಲಾಯಿತು.

ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಅವರ ಕಾಯಕ ಹಾಗೂ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.

ನೊಳಂಬ ವೀರಶೈವ ಸಂಘದ ಕೇಂದ್ರ ಸಮಿತಿ ನಿರ್ದೇಶಕರೂ, ಗ್ರಾ.ಪಂ. ಮಾಜಿ ಅಧ್ಯಕ್ಷರೂ ಆದ ಬಿ.ಕೆ. ಮಹೇಶ್ವರಪ್ಪ, ಗ್ರಾ.ಪಂ. ನೂತನ ಸದಸ್ಯರಾದ ಎನ್‌.ಎಂ. ಪಾಟೀಲ್‌, ಕೆ.ಜಿ. ಬಸವರಾಜ್, ವೈ.ಆರ್‌. ಚೇತನ್‌ಕುಮಾರ್‌, ಕವಿತಾ ಮಾಕನೂರು ಶಿವು, ರೇಣುಕಮ್ಮ ಪೂಜಾರ್‌ ನಾಗರಾಜ್, ಜಿ. ಬೇವಿನಹಳ್ಳಿಯ ಬಿ.ಕೆ. ಜಯಮ್ಮ ರಂಗನಾಥ್‌, ಆನಂದಗೌಡ, ಕೆ.ಜಿ. ಮಹಾಂತೇಶ್‌, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಎಂ. ದೇವೇಂದ್ರಪ್ಪ, ಎಂ.ವಿ.  ನಾಗರಾಜ್, ಕೆ.ಎಂ. ರಾಮಪ್ಪ, ಜಿ.ಆರ್. ಹಾಲೇಶ್‌ಕುಮಾರ್, ಪತ್ರಕರ್ತ ಪ್ರಕಾಶ್, ನಿಂಗಪ್ಪ, ಪಿಡಿಒ ದಾಸರ ರವಿ, ಸಿಬ್ಬಂದಿಗಳಾದ ಬಿ. ದಾನಪ್ಪ, ಬಿ. ಮೌನೇಶ್‌, ಎಂ.ಎಸ್‌. ಬಸವರಾಜ್, ಕೆ.ಇ. ಬಸವರಾಜ್, ಆನಂದ್‌, ರವಿ, ಮಂಜು ಮತ್ತಿತರರು ಭಾಗವಹಿಸಿದ್ದರು.

error: Content is protected !!