ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೂ ಸನ್ಮಾನ

ರಾಣೇಬೆನ್ನೂರು, ಜ.11- ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಯ ಗಳಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಅಭಿನಂದನಾ ಸಮಾರಂಭವು ಆದಿಶಕ್ತಿ ದೇವಸ್ಥಾನದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.

ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಸದಸ್ಯರನ್ನು ಸನ್ಮಾನಿಸಿ ವಿಶೇಷ ಕಾಳಜಿ ವಹಿಸಿ ಗ್ರಾಮದ ಅಭಿವೃದ್ಧಿ ಮಾಡುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಮುಖಂಡರುಗಳಾದ ಪುಟ್ಟಪ್ಪ ಮರಿಯಮ್ಮನವರ, ರವಿ ಪಾಟೀಲ, ಶೇಖಪ್ಪ ಬೇಡರ, ಬಿ.ಎಸ್. ಮರದ, ಮಂಜನ ಗೌಡ ಪಾಟೀಲ, ಶೇರು ಕಾಬೂಲಿ ಇನ್ನಿತರರಿದ್ದರು.

error: Content is protected !!