ಹರಿಹರ : ಚಲನಚಿತ್ರ ನಟರ ವೇಷದಲ್ಲಿ ರಸ್ತೆ ಜಾಗೃತಿ

ಹರಿಹರ, ಜ.6- ವಾಹನ ಸವಾರರು ರಸ್ತೆಯಲ್ಲಿ ಓಡಾಡುವ ವೇಳೆ ಸುರಕ್ಷತಾ ಕ್ರಮಗಳ ಬಗ್ಗೆ ಹಾಗೂ ಸರ್ಕಾರದ ಕಾನೂನು ಪಾಲನೆ ವಿಚಾರಕ್ಕೆ ಜಾಗೃತಿ ಮೂಡಿಸಲು ಜ್ಯೂನಿಯರ್ ಚಲನಚಿತ್ರ ನಟರಾದ ವಿಷ್ಣುವರ್ಧನ್ ಮತ್ತು ಶಂಕರನಾಗ್‍ರವರು ಸಾರ್ವಜನಿಕರಿಗೆ ಚಲನಚಿತ್ರ ಗೀತೆಗಳನ್ನು ಹೇಳುವ ಮೂಲಕ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ಐ ಸುನಿಲ್ ಬಸವರಾಜ್ ತೆಲಿ, ಸಿಬ್ಬಂದಿಗಳಾದ ರಾಜಶೇಖರಯ್ಯ, ಸತೀಶ್, ಡಿ.ಟಿ. ಶ್ರೀನಿವಾಸ್ ಹಾಗೂ ಇತರರು ಹಾಜರಿದ್ದರು. 

error: Content is protected !!