ಹರಿಹರ : ಶ್ರೀರಾಮ ಮಂದಿರಕ್ಕೆ ನಿಧಿ ಸಮರ್ಪಣಾ ಅಭಿಯಾನ

ಹರಿಹರ, ಜ.6- ಶ್ರೀರಾಮ ಮಂದಿರ ನಿರ್ಮಾಣಕ್ಕೆ  ನಿಧಿ ಸಮರ್ಪಣಾ ಅಭಿಯಾನ ಪ್ರಯುಕ್ತ ರಾಮ ಭಜನೆ, ಕಾರ್ತಿಕೋತ್ಸವ, ಪ್ರಭು ಶ್ರೀರಾಮಚಂದ್ರರ ಹಾಗೂ ಭಾರತ ಮಾತಾ ಪೂಜೆ, ಮುತ್ತೈದೆಯರಿಗೆ ಅರಿಶಿಣ-ಕುಂಕುಮ ಕಾರ್ಯಕ್ರಮವನ್ನು ನಗರದ ಮಹಜೇನಹಳ್ಳಿ ಊರಮ್ಮನ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಗರದ ದೈವಜ್ಞ ಮಹಿಳಾ ಮಂಡಳಿ ವತಿಯಿಂದ ರಾಮ ಭಜನೆ ನಡೆಸಲಾಯಿತು. ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ  ಎಸ್. ಎಂ. ವೀರೇಶ್ ಹನಗವಾಡಿ, ನಗರಸಭೆ ಸದಸ್ಯೆ ನೀತಾ ಮೆಹರ್ವಾಡೆ, ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಮಾರುತಿ ಶೆಟ್ರು, ಕೃಷ್ಣಮೂರ್ತಿ ಶೆಟ್ರು,  ಶಿವಪ್ರಕಾಶ್ ಶಾಸ್ತ್ರಿ, ಉಪಾಧ್ಯಕ್ಷ ತುಳಜಪ್ಪ ಭೂತೆ, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!