ಜಾನುವಾರು, ಕುರಿ ಸಂತೆ ಪ್ರಾರಂಭ

ಕೂಡ್ಲಿಗಿ, ಜ. 6- ಪಟ್ಟಣದ ಬೆಂಗಳೂರು  ರಸ್ತೆಯಲ್ಲಿರುವ ಶ್ರೀ ಕೊತ್ತಲ ಆಂಜನೇಯ ಬಯಲು ಜಾಗದಲ್ಲಿ ಜಾನುವಾರುಗಳು ಹಾಗೂ ಕುರಿ ಸಂತೆಯನ್ನು ಬಸವೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಪ.ಪಂ. ಅಧ್ಯಕ್ಷರಾದ ಶಾರದಾಬಾಯಿ ಹಾಗೂ ಊರಿನ ಹಿರಿಯ ಮಲ್ಲಾಪುರದ ಭರಮಣ್ಣ ಉದ್ಘಾಟಿಸಿದರು.

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ, ಪ್ರತಿ ಬುಧವಾರ ಸಂತೆ ನಡೆಯಲಿದ್ದು, ತಾವು ಸದಾ ರೈತರ ಜೊತೆ ನಿಲ್ಲುತ್ತೇನೆ ಎಂದು ಹೇಳಿದರು.

error: Content is protected !!