ಮಲೇಬೆನ್ನೂರಿನಲ್ಲಿ ಸವಿತಾ ಮಹರ್ಷಿಗಳ ಜಯಂತಿ

ಮಲೇಬೆನ್ನೂರು, ಫೆ. 9- ಇಲ್ಲಿನ ಪುರಸಭೆ ಮತ್ತು ನಾಡ ಕಛೇರಿಯಲ್ಲಿ ಸವಿತಾ (ಕ್ಷೌರಿಕ) ಸಮಾಜದ ಮೂಲ ಪುರುಷರಾದ ಸವಿತಾ ಮಹರ್ಷಿಗಳ ಜಯಂತಿ ಆಚರಿಸಲಾಯಿತು. ಉಪ ತಹಶೀಲ್ದಾರ್ ಆರ್. ರವಿ ಮತ್ತು ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರುಕ್ಮಿಣಿ ಅವರು ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು.

ನಾಡ ಕಛೇರಿಯ ಪುಷ್ಪಾ ಹಿರೇಮಠ, ಅಂಜಿನಪ್ಪ, ಮಾರುತಿ, ಸವಿತಾ ಸಮಾಜದ ಅಧ್ಯಕ್ಷ ಬಸವರಾಜ್, ಗೌರವಾಧ್ಯಕ್ಷ ಕೆ.ಬಿ. ಶ್ರೀನಿವಾಸ್, ಎನ್.ಎಸ್. ಆಂಜನೇಯ, ಪಿ.ಟಿ. ಶಂಕರ್‌ಬಾಬು, ಪ್ರಭಾಕರ್, ಸತೀಶ್, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಕೆ.ಜಿ. ಲೋಕೇಶ್, ಬಿ. ಮಂಜುನಾಥ್, ಬೆಣ್ಣೆಹಳ್ಳಿ ಸಿದ್ದೇಶ್, ಸಾಬೀರ್ ಜಯಸಿಂಹ, ಮಹ್ಮದ್ ನಯಾಜ್, ನಾಮಿನಿ ಸದಸ್ಯ ಪಿ.ಆರ್. ರಾಜು, ಮಾಜಿ ಸದಸ್ಯ ಬಿ. ಸುರೇಶ್, ಎಂ.ಬಿ. ರುಸ್ತುಂ, ಓ.ಜಿ. ಕುಮಾರ್, ದಾದಾವಲಿ, ಚಮನ್ ಷಾ, ಎಸ್.ಜಿ. ಹಾಲೇಶಪ್ಪ, ಜಿಗಳಿಯ ಕೆ.ಎಂ. ರಾಮಪ್ಪ  ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!