ಸುತಾರರಿಗೆ ದಾವಣಗೆರೆ ನಂಟು!

 ದಾವಣಗೆರೆ, ಜ.8- ಪದ್ಮಶ್ರೀ ಇಬ್ರಾಹಿಂ ಸುತಾರ ನಿಧನಕ್ಕೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ, ದಾವಣಗೆರೆ ಬಗೆಗಿದ್ದ ಅವರ ಒಡನಾಟವನ್ನು ವಿ.ಬಿ.ಪಿ. ಫೌಂಡೇಶನ್ ಮುಖ್ಯಸ್ಥ ಶಿವಕುಮಾರ್ ಮೇಗಳಮನಿ ಅವರು ಸ್ಮರಿಸುತ್ತಾ, ನುಡಿ ನಮನ ಸಲ್ಲಿಸಿದ್ದಾರೆ. 

ಸುತಾರರು ದಾವಣಗೆರೆಗೆ ಬಂದಾಗಲೆಲ್ಲ ನಮ್ಮ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಹೋಳಿಗೆ ಊಟ, ದಾವಣಗೆರೆ ಬೆಣ್ಣೆ ದೋಸೆ ಅಂದರೆ ಅವರಿಗೆ  ಬಲು ಇಷ್ಟ. ಒಮ್ಮೊಮ್ಮೆ ಅದರ ರುಚಿಗೆ ಮಾರುಹೋಗಿದ್ದು ಉಂಟು. ಹಾಗೆಯೇ ಇಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.  ವಾಗ್ಮಿ, ಅಧ್ಯಾತ್ಮಿಕ ಚಿಂತಕ, ಸರ್ವಧರ್ಮ ಸಮನ್ವಯಕಾರ ಪದ್ಮಶ್ರೀ ಇಬ್ರಾಹಿಂ ಸುತಾರರ ನಿಧನದ ಸುದ್ದಿಯಿಂದ ನಿಜಕ್ಕೂ ಸಮಾಜಕ್ಕೆ ಆಘಾತವಾಗಿದೆ ಎಂದು ಶಿವಕುಮಾರ್ ದುಃಖಿಸಿದ್ದಾರೆ.

error: Content is protected !!