ಭೋವಿ ವಿದ್ಯಾರ್ಥಿ ನಿಲಯದ ಸಭೆ

ದಾವಣಗೆರೆ, ಫೆ. 8- ನಗರದ ಭೋವಿ ವಿದ್ಯಾರ್ಥಿ ನಿಲಯದಲ್ಲಿ ಸಮಾಜದ ಮುಖಂಡ ಹೆಚ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ಹಾಸ್ಟೆಲ್‌ನ ಸಾಧಕ-ಬಾಧಕ ಕುರಿತು ಭಾನುವಾರ ಸಭೆ ನಡೆಯಿತು.

ಇದೇ ವೇಳೆ ಮಾತನಾಡಿದ ಮಂಜುನಾಥ, ಸಮಾಜದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಕಾರ್ಯದರ್ಶಿ ಪಿ. ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿ, ಭೋವಿ ವಿದ್ಯಾರ್ಥಿ ನಿಲಯದ ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಮಾತನಾಡಿದರು.

ಸಮಾಜದ ಮುಖಂಡರಾದ ಆಟೋ ಕಾಲೋನಿ ತಿಮ್ಮಣ್ಣ, ಸೋಮಶೇಖರ್, ಬ್ಯಾಂಕ್ ರಾಮಣ್ಣ, ಚೌಡಪ್ಪ ಗೊಲ್ಲರಹಳ್ಳಿ, ಪಾಲಿಕೆಯ ಸದಸ್ಯ ಆರ್. ಶಿವಾನಂದ್, ಹೆಚ್. ಬಸವರಾಜ್, ಸುರೇಶ್ ಬುಳ್ಳಾಪುರ, ಸಂತೋಷ, ವೈ. ಬಸವರಾಜ್, ಅರುಣ್ ಕುಮಾರ್, ಗೋವಿಂದ ರಾಜ್, ಮಂಜುನಾಥ (ನಲ್ಲಿ), ಹನುಮಂತ ವಿನೋಬನಗರ, ವೆಂಕಪ್ಪ ಮಾಸ್ಟರ್, ದಶರಥ, ವೆಂಕಟೇಶ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. 

ಹನುಮಂತಪ್ಪ ನಿರೂಪಿಸಿದರು. ಕಿರಣ್ ಕುಮಾರ್ ಸ್ವಾಗತಿಸಿದರು, ಮುಖಂಡ ಇ. ಶ್ರೀನಿವಾಸ್ ವಂದಿಸಿದರು.

error: Content is protected !!