ಎಂ.ಎ. ರಾಜ್ಯಶಾಸ್ತ್ರ ವಿಭಾಗದಲ್ಲಿ ಕುಂಬಳೂರಿನ ಪೂಜಾ ಪ್ರಥಮ ರ್ಯಾಂಕ್

ಮಲೇಬೆನ್ನೂರು, ಜ.28- ಕುಂಬ ಳೂರು ಗ್ರಾಮದ ಎಂ.ಎಸ್.ಪೂಜಾ ಅವರು ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಮೊದಲ ರಾಂಕ್ ಪಡೆದಿದ್ದಾರೆ. ಪೂಜಾ ಅವರು, ಕುಂಬಳೂರಿನ ಹಿರಿಯರಾದ ಮಾಗಾನಹಳ್ಳಿ ಹಾಲಪ್ಪನವರ ಮೊಮ್ಮ ಗಳು ಹಾಗೂ ಗ್ರಾ.ಪಂ. ಸದಸ್ಯರಾದ ಶ್ರೀಮತಿ ಉಮಾದೇವಿ ಎಂ.ಹೆಚ್. ಶಿವರಾಮಚಂದ್ರಪ್ಪ ದಂಪತಿ ಪುತ್ರಿ. 

ಸನ್ಮಾನ :  ಪ್ರಥಮ ರಾಂಕ್ ಪುರಸ್ಕೃತರಾದ ಎಂ.ಎಸ್.ಪೂಜಾ ಅವರನ್ನು ಶುಕ್ರವಾರ ಸಂಜೆ ಕುಂಬಳೂರಿನ ಅವರ ಮನೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಶಿವ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಡಾ. ಬಿ.ಚಂದ್ರಶೇಖರ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ವರ್ತಕ ತಳಸದ ಬಸವರಾಜ್, ಪುರಸಭೆ ಮಾಜಿ ಸದಸ್ಯ ಎ.ಆರೀಫ್ ಅಲಿ, ಭೋವಿಕುಮಾರ್, ಪಿ.ಹೆಚ್.ಶಿವಕುಮಾರ್, ತಾಹೀರ್, ಸಿವಿಲ್ ಇಂಜಿನಿಯರ್ ಬೆಣ್ಣೆಹಳ್ಳಿ ಶಿವಶಂಕರ್, ಲಿಂಗೇಶ್ವರ ಮೆಡಿಕಲ್ಸ್‌ನ ಎನ್.ಕೆ.ರಾಜೀವ್, ದಾಗಿನಕಟ್ಟೆ ವಾಲ್ಮೀಕಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಆರ್.ನಾಗರಾಜ್, ಪತ್ರಕರ್ತ ಜಿಗಳಿ ಪ್ರಕಾಶ್ ಮತ್ತಿತರರು ಸೇರಿ ಸನ್ಮಾನಿಸಿ, ಅಭಿನಂದಿಸಿದರು.

error: Content is protected !!