ಭರಮಸಾಗರದ ಪಾಷಾ ಆಯ್ಕೆ

ಭರಮಸಾಗರ, ಜ.27- ರಾಜ್ಯ ಕಾಂಗ್ರೆಸ್ ಕಿಸಾನ್ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಭರಮಸಾಗರದ ದಿ|| ಹಯಾತ್ ಸಾಬ್‌ರ ಮಗ ಗ್ರಾ.ಪಂ. ಮಾಜಿ ಅಧ್ಯಕ್ಷ ಶಮೀಮ್ ಪಾಷಾ ಅವರ ನಿವಾಸಕ್ಕೆ ಮಾಜಿ ಸಚಿವ ಹೆಚ್. ಆಂಜನೇಯ ಭೇಟಿ ನೀಡಿ, ಶಾಲು ಹೊದಿಸಿ ಸನ್ಮಾನಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಬಷೀರ್ ಸಾಬ್ ಇತರರು ಇದ್ದರು.

error: Content is protected !!