ನಾಡ ಕಚೇರಿಯಲ್ಲಿ ಸಿದ್ದರಾಮ ಜಯಂತಿ

ಮಲೇಬೆನ್ನೂರು, ಜ.18- ಇಲ್ಲಿನ ನಾಡ ಕಚೇರಿಯಲ್ಲಿ ಕಾಯಕ ಯೋಗಿ ಶ್ರೀಗುರು ಸಿದ್ದರಾಮೇಶ್ವರರ ಜಯಂತಿಯನ್ನು ಶನಿವಾರ ಆಚರಿಸಲಾಯಿತು. ಉಪತಹಶೀಲ್ದಾರ್ ಆರ್.ರವಿ ಅವರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಸಹಾಯಕ ಅಂಜಿನಪ್ಪ, ಬಸವರಾಜ್, ಪುರಸಭೆ ಸದಸ್ಯ ಭೋವಿ ಶಿವು, ಭೋವಿಕುಮಾರ್, ಯುನೂಸ್ ಮತ್ತಿತರರು ಭಾಗವಹಿಸಿದ್ದರು.

error: Content is protected !!