ದಾವಣಗೆರೆ,ಜ.9- ಇಲ್ಲಿನ ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಪೋಷಕರ ತರಬೇತಿ ಕಾರ್ಯಾಗಾರ ನಡೆಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದಾರ್ಥ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉಪಾಧ್ಯಕ್ಷರಾದ ನಾಗವೇಣಿ, ಕೆ.ಎಲ್.ಹರೀಶ್ ಬಸಾಪುರ ಮಾತನಾಡಿದರು. ಶಿಕ್ಷಕರಾದ ಸ್ಮಿತಾ ಪ್ರಾರ್ಥನೆ ಮಾಡಿದರೆ, ಪ್ರಭಾರಿ ಮುಖ್ಯಶಿಕ್ಷಕ ಸಂತೋಷ್ ಕುಮಾರ್ ಸ್ವಾಗತಿಸಿದರು. ಹಿರಿಯ ಶಿಕ್ಷಕರಾದ ಶಶಿಕಲಾ ನಿರೂಪಿಸಿದರು. ಶಿಕ್ಷಕ ರವಿ ವಂದಿಸಿದರು.
ಸದಸ್ಯರು ಹಾಗೂ ಪೋಷಕರಿಗೆ ಮ್ಯೂಸಿಕಲ್ ಚೇರ್ ಆಟ ಹಾಗು ಇನ್ನಿತರೆ ಮನೋರಂಜನಾ ಕಾರ್ಯಕ್ರಮ ಗಳನ್ನು ದೈಹಿಕ ಶಿಕ್ಷಕರಾದ ಪ್ರೇಮಕುಮಾರಿ ಅವರು ನಡೆಸಿಕೊಟ್ಟರು.
ಶಾಲೆಯ ಶಿಕ್ಷಕಿಯರಾದ ನಿಂಗಮ್ಮ, ಸೌಮ್ಯ, ಸದಸ್ಯರು ಗಳಾದ ಚಂದ್ರಶೇಖರ್, ಮಹಾಂತೇಶ್, ರಮೇಶ್, ಗುರುಸಿದ್ದಯ್ಯ, ಹಾಲೇಶ್, ದೇವೀರಮ್ಮ, ಆಶಾ, ಸುನೀತ, ಮಂಜುಳಾ, ಸುಮಿತ್ರ, ಶಕುಂತಲಾ, ಪುಷ್ಪ, ಭವ್ಯ, ಪೋಷಕರಾದ ಶೃತಿ, ರೇಖಾ, ಮಮತಾ, ಕರಿಬಸಪ್ಪ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.