ಹರಿಹರ ವಕೀಲರ ಸಂಘದ ಅಧ್ಯಕ್ಷರಾಗಿ ಆನಂದ್

ಹರಿಹರ ವಕೀಲರ ಸಂಘದ ಅಧ್ಯಕ್ಷರಾಗಿ ಆನಂದ್

ನಗರದ ವಕೀಲರ ಸಂಘದ ಎರಡು ವರ್ಷಗಳ ಅವಧಿಗೆ ನಡೆಯುವ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ತಾವು,  ಅನೇಕ ವಕೀಲರ ಆಶಯದಿಂದ ಬಿ. ಆನಂದ್‌ ಅವರಿಗೆ ಅವಕಾಶ ಕೊಟ್ಟು  ಚುನಾವಣಾ ಕಣದಿಂದ ನಾವಪತ್ರವನ್ನು ವಾಪಸ್ಸು ಪಡೆದಿರುವುದಾಗಿ ವಕೀಲ ಹೆಚ್.ಹೆಚ್. ಲಿಂಗಾರಾಜ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.  ನಿಕಟಪೂರ್ವ ಅಧ್ಯಕ್ಷ ಪಿ. ರುದ್ರಗೌಡ ಮಾತನಾಡಿ, 2014 ರಿಂದ ನಗರದಲ್ಲಿ ಹೊಸ ಕೋರ್ಟ್ ಆದಾಗಿನಿಂದ ಇಲ್ಲಿಯವರೆಗೆ ವಕೀಲರ ಸಂಘಕ್ಕೆ ಅವಿರೋಧ ಆಯ್ಕೆಯಾಗುತ್ತಿದೆ. ಈ ಬಾರಿಯೂ ಅವಿರೋಧ ಆಯ್ಕೆ ಮಾಡುವ ಉದ್ದೇಶದಿಂದ ಬಿ. ಆನಂದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. 

ವಕೀಲ ಗಣೇಶ ದುರ್ಗದ್ ಮಾತನಾಡಿದರು. ಈ ಸಂದರ್ಭದಲ್ಲಿ ವಕೀಲರಾದ ತಿಮ್ಮನಗೌಡ, ಮಹೋನ್ ಕಿರೋಜಿ, ಕೆ.ಎಸ್. ಮೊನೇಶ್, ರಾಘವೇಂದ್ರ. ಸಿ.ಬಿ. ಗಣೇಶ, ಬಿ.ಎ. ಆನಂದ್, ಕೆ.ವಿ. ನಾಗರಾಜ್, ಬಿ.ಸಿ. ಪ್ರಕಾಶ್, ಮಾರುತಿ ಬೇಡರ್, ಶಾಂತರಾಜ್ ಬೆಳ್ಳೂಡಿ ಇತರರು ಹಾಜರಿದ್ದರು. 

error: Content is protected !!