ಕುಸ್ತಿ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ

ಕುಸ್ತಿ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ

ಮಲೇಬೆನ್ನೂರು, ಡಿ.20- ಹರಿಹರದ ಗಾಂಧಿ ಮೈದಾನದಲ್ಲಿ ನಾಳೆ ದಿನಾಂಕ 21 ರಿಂದ 24 ರವರೆಗೆ ಕರ್ನಾಟಕ ಕುಸ್ತಿ ಸಂಘ ಮತ್ತು ದಾವಣಗೆರೆ ಕುಸ್ತಿ ಸಂಘ ಹಾಗೂ ಶ್ರೀ ಹರಿಹರ ಕುಸ್ತಿ ಜೀರ್ಣೋದ್ಧಾರ ಸಮಿತಿ ವತಿಯಿಂದ  ಹಮ್ಮಿಕೊಂಡಿರುವ 3ನೇ ವರ್ಷ ರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯ ಪೋಸ್ಟರ್‌ಗಳನ್ನು ನಿನ್ನೆ ಸಂಜೆ ಬೆಳ್ಳೂಡಿ ಮಠದಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಬಿಡುಗಡೆ ಮಾಡಿದರು.

ಕುಸ್ತಿ ಪಂದ್ಯಾವಳಿಯ ಆಯೋ ಜಕ ನಂದಿಗಾವಿ ಶ್ರೀನಿವಾಸ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕು ಮಾರ್, ಪೈಲ್ವಾನ್ ದ್ಯಾವನಾಯ್ಕರ್, ಎಸ್.ಜಿ.ಪರಮೇಶ್ವರಪ್ಪ, ಕೊಳೇನ ಹಳ್ಳಿ ಸತೀಶ್, ಕರೇಕಟ್ಟೆ ಲೋಕೇಶ್, ಕೆ.ಪಿ.ಗಂಗಾಧರ್, ಪಿ.ಹೆಚ್.ಶಿವಕುಮಾರ್, ಡಿ.ಕೆ.ಸಿದ್ದನಗೌಡ, ಎಳೆಹೊಳೆ ಕುಮಾರ್, ಮಲ್ಲಿಕಾರ್ಜುನ್ ಪೂಜಾರ್, ಎಸ್.ಎಂ. ಮಂಜುನಾಥ್, ರಾಜನಹಳ್ಳಿ ಲಂಕ್ಯೆಪ್ಪ, ಪತ್ರಕರ್ತ ಜಿಗಳಿ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

error: Content is protected !!