ಮಲೇ ಬೆನ್ನೂರು, ಡಿ.20- ಹೊಳೆಸಿರಿಗೆರೆ ಗ್ರಾಮದಲ್ಲಿ ಮಂಗಳವಾರ ಉಪ ತಹಶೀಲ್ದಾರ್ ಆರ್.ರವಿ ಅವರು, ಎಫ್ಐಡಿ (ರೈತರಿಗಾಗಿ ಸರ್ಕಾರದ ವತಿಯಿಂದ ನೀಡಲಾಗುವ ವಿಶೇಷ ಗುರುತಿನ ಸಂಖ್ಯೆ) ಮಾಡಿಸದ ರೈತರ ಮನೆಗಳಿಗೆ ತೆರಳಿ ಅಗತ್ಯ ದಾಖಲೆಗಳನ್ನು ಪಡೆದು ಸ್ಥಳದಲ್ಲಿಯೇ ಎಫ್ಐಡಿ ಅರ್ಜಿಯನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿದರು. ಅಲ್ಲದೇ ಎಫ್ಐಡಿ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದರು.
ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ನವೀನ ಕಟ್ಟೇರ, ಗ್ರಾಮ ಸೇವಕರಾದ ಶ್ರೀಮತಿ ಮಂಜಮ್ಮ ಈ ವೇಳೆ ಹಾಜರಿದ್ದರು.