ಹೆಚ್ಚುವರಿ ಬಸ್‌ಗಳನ್ನು ಬಿಡಲು ಭಾರತೀಯ ಮಹಿಳಾ ಒಕ್ಕೂಟದ ಆಗ್ರಹ

ಹೆಚ್ಚುವರಿ ಬಸ್‌ಗಳನ್ನು ಬಿಡಲು  ಭಾರತೀಯ ಮಹಿಳಾ ಒಕ್ಕೂಟದ ಆಗ್ರಹ

ದಾವಣಗೆರೆ, ಡಿ. 20 – ರಾಜ್ಯಾದ್ಯಂತ ಹೆಚ್ಚುವರಿ ಬಸ್‌ಗಳನ್ನು ಬಿಡಲು ಭಾರತೀಯ ಮಹಿಳಾ ಒಕ್ಕೂಟದ ಸಂಘಟನೆ ಸರ್ಕಾರಕ್ಕೆ ಆಗ್ರಹ ಮಾಡಿದೆ.

ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಕರೆಯ ಮೇರೆಗೆ ಈ ದಿನ ಭಾರತೀಯ ಮಹಿಳಾ ಒಕ್ಕೂಟದ ಕಾರ್ಯಕರ್ತರು ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ, ರಾಜ್ಯಾದ್ಯಂತ ಹೆಚ್ಚುವರಿ ಬಸ್ ಗಳನ್ನು ಬಿಡಬೇಕೆಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಹಸೀಲ್ದಾರ್ ಅವರ ಮೂಲಕ  ಮನವಿ ಸಲ್ಲಿಸಿದರು.

ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಬಿ. ಶಾರದಮ್ಮ, ಕಾರ್ಯದರ್ಶಿ ಎಸ್ಎಸ್ ಮಲ್ಲಮ್ಮ, ಖಜಾಂಚಿ ಸರೋಜ ಮುಖಂಡರುಗಳಾದ ಹೆಚ್.ಜಿ. ಮಂಜುಳಾ, ಕುಸುಮ ಎಂ.ಆರ್, ಹೆಚ್ ಇಂದಿರಾ ಗಾಂಧಿ , ತಬ್ರೇಜ್ ,ಬಿ.ಜೆ. ರೇಖಾ ಮತ್ತಿತರರು ಇದ್ದರು.

error: Content is protected !!