ಶ್ರೀ ಚೌಡಾಂಬಿಕಾ ದೇವಿಗೆ ಕಾರ್ತಿಕೋತ್ಸವದ ವಿಶೇಷ ಅಲಂಕಾರ

ಶ್ರೀ ಚೌಡಾಂಬಿಕಾ ದೇವಿಗೆ ಕಾರ್ತಿಕೋತ್ಸವದ ವಿಶೇಷ ಅಲಂಕಾರ

ದಾವಣಗೆರೆ, ಡಿ.20- ನಗರದ ಹಳೇ ಭಾಗದಲ್ಲಿರುವ ಶ್ರೀ ಚೌಡಾಂಬಿಕಾ ದೇವಸ್ಥಾನದಲ್ಲಿ 66ನೇ ಕಾರ್ತಿಕೋತ್ಸವದ ಅಂಗವಾಗಿ ಶ್ರೀದೇವಿ ಮೂರ್ತಿಗೆ ಅತ್ಯಾಕರ್ಷಕವಾದ ವಜ್ರ ಖಚಿತ ಸುವರ್ಣ ರಜತ ಕವಚಗಳ ಅಲಂಕಾರ ಮಾಡಲಾಗಿತ್ತು. 

ಪಾರಂಪರಿಕ ಶ್ರದ್ಧಾ-ಭಕ್ತಿಗ ಳಿಂದ ನೆರವೇರಿದ ಮಹೋತ್ಸವ ದಲ್ಲಿ ದೇವಸ್ಥಾನದ ವ್ಯವಸ್ಥಾಪಕರು ಹಾಗೂ ಸೇವಾಕರ್ತರಾದ ಶಾಮನೂರು ಲಕ್ಷ್ಮಿನಾರಾಯಣ ಶೆಟ್ಟರ್‌ ಮಕ್ಕಳು ಮತ್ತು ಕುಟುಂಬದವರು ಶಾಮನೂರು ಶ್ರೀನಿವಾಸ್ ಶೆಟ್ಟರ್ ಮನೆತನ ದವರು ಹಾಗೂ ಭಕ್ತ ಮಂಡಳಿಯವರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

error: Content is protected !!