ಕೂಲಿ ಹಣ ಬಿಡುಗಡೆಗೆ ಆಗ್ರಹಿಸಿ ಪಲ್ಲಾಗಟ್ಟೆಯಲ್ಲಿ ಪ್ರತಿಭಟನೆ

ಕೂಲಿ ಹಣ ಬಿಡುಗಡೆಗೆ ಆಗ್ರಹಿಸಿ ಪಲ್ಲಾಗಟ್ಟೆಯಲ್ಲಿ ಪ್ರತಿಭಟನೆ

ದಾವಣಗೆರೆ, ಡಿ.17- ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ತಾಲ್ಲೂಕು ಕಾರ್ಯಕರ್ತರು ಪಲ್ಲಾಗಟ್ಟೆಯಲ್ಲಿ ನರೇಗಾದಿಂದ ಮೂರು ತಿಂಗಳಿಂದ ಹಣ ಬಿಡುಗಡೆಯಾಗದೇ ಇರುವ ಬಗ್ಗೆ ಪ್ರಧಾನಮಂತ್ರಿಯವರಿಗೆ ಪತ್ರ ಚಳುವಳಿ ಮಾಡಲಾಯಿತು.ರಾಜ್ಯ ಸರ್ಕಾರ ಕೂಡ ಬರಗಾಲ ಎಂದು ಘೋಷಣೆ ಮಾಡಿದೆ, ಅದೇ ರೀತಿ ಕೇಂದ್ರ ಸರ್ಕಾರ ಕೂಡ ಬರಗಾಲ ಎಂದು ಘೋಷಣೆ ಮಾಡಬೇಕು. ಮೂರು ವೇತನವನ್ನು ಬಡ್ಡಿ ಸಮೇತವಾಗಿ ಹಣ ಬಿಡುಗಡೆ ಮಾಡಬೇಕು ಎಂದು ಕಾರ್ಮಿಕರು ಪತ್ರ ಚಳುವಳಿ ಮಾಡಿದರು.

ಚಳುವಳಿಯಲ್ಲಿ ದಾವಣಗೆರೆ ತಾಲ್ಲೂಕು ಕಾರ್ಯಕರ್ತರಾದ ಶಶಿಕಲಾ, ಹುಲಿಗೆಮ್ಮ, ಜ್ಯೋತಿ, ಅನ್ನಪೂರ್ಣ, ಹನುಮಂತಪ್ಪ, ಚಂದ್ರಪ್ಪ, ಜಯಪ್ಪ ಮುಂತಾದ ಕಾರ್ಮಿಕರು ಭಾಗವಹಿಸಿದ್ದರು.

error: Content is protected !!